ರಾಜಕೀಯ..
ಇದಲ್ಲ ಇಂದ್ರಜಾಲ, ಮಂತ್ರ ಮಾಯ
ಹೆರುವದು ಹಗರಣದ ಮಗುವ,
ಮಾಸುವಮುನ್ನ ಹಳೆಯ ಗಾಯ
ಹರಿಯುವುದು ಹಣದ ಹೊಳೆ,
ಹರಿದಂತೆ ಬಾರಿನಲಿ ಪೇಯ
ಹೆದರಬೇಡ ಗೆಳೆಯ,
ಇದುವೇ ರಾಜಕೀಯ.
Wednesday, June 27, 2007
Tuesday, June 26, 2007

ಉಪಮಾ ಕಾಳಿದಾಸಸ್ಯ.
ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು,
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ
ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ ಕಮಲದಲ್ಲಿ ಇನ್ನೆರಡು ಕಮಲಗಳು ಹೇಗೆ ಅರಳಿವೆ?. ಎಷ್ಟು ಸುಂದರವಾಗಿದೆ ಅಲ್ವಾ? ಕಾಳಿದಾಸ ನಿಜವಾಗಿಯೂ ಆ ಶಾರದಾಂಬೆಯ ಪುತ್ರನೇ
ಇದರ ಹಿಂದಿನ ಕಥೆ ನನಗೆ ತಿಳಿದಷ್ಟು ಹೇಳೋದಾದ್ರೆ, ಭೋಜರಾಜನ ಆಸ್ಥಾನ ವಿದ್ವಾಂಸರುಗಳ ಕಾಶಿಯಾಗಿತ್ತು. ಅಲ್ಲಿ ಸಾಹಿತ್ಯ ಪ್ರಪಂಚದ ಅಥಿರಥ ಮಹಾರಥಿಗಳಿದ್ರು. ಒಮ್ಮೆ ಒಬ್ಬ ವಿದ್ವಾಂಸ ಬಂದು ಸವಾಲು ಹಾಕಿದ, ’ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ’ ಇದರ ದ್ವಿತೀಯ ಚರಣವನ್ನ ಪೂರ್ತಿ ಮಾಡಿ.ಇದನ್ನ ಪೂರ್ತಿ ಮಾಡಿದ್ರೆ ನಾನು ಅವರ ದಾಸ ಆಗ್ತೀನಿ ಇಲ್ಲ ಅಂದ್ರೆ ಆಸ್ಥಾನದಲ್ಲಿರುವ ಎಲ್ಲ ವಿದ್ವಾಂಸರೂ ಅವನಿಗೆ ಶರಣಾಗ್ಬೇಕು ಮತ್ತು ರಾಜ್ಯದಲ್ಲಿ ಅರ್ಧ ಭಾಗ ಕೊಡ್ಬೇಕು ಅಂತ ಸವಾಲು ಹಾಕಿದ. ಆಸ್ಥಾನ ವಿದ್ವಾಂಸರೆಲ್ಲ ಮೂಕವಿಸ್ಮಿತರಾದ್ರು ಯಾರ ಹತ್ರಾನೂ ಇದಕ್ಕೆ ಉತ್ತರ ಇರ್ಲಿಲ್ಲ. ಇದನ್ನ ನೋಡಿ ಭೋಜ ಸಂಪೂರ್ಣವಾಗಿ ವಿಚಲಿತನಾಗಿ ಹೋದ. ಆಸ್ಥಾನದಲ್ಲಿ ಕಾಳಿದಾಸನ ಅನುಪಸ್ಥಿತಿ ಎದ್ದು ಕಾಣ್ತಾ ಇತ್ತು. ಭೋಜ ಕಾಳಿದಾಸನ ನಡುವೆ ಆದ ಕೆಲವು ತಪ್ಪು ಕಲ್ಪನೆಗಳಿಂದ ಕಾಳಿದಾಸನನ್ನ ದೇಶದ ಹೊರಗಟ್ಟಿದ್ದ. ಸಮಸ್ಯೆಯ ಗಂಭೀರತೆಯನ್ನು ನೋಡಿ ಭೋಜ ಡಂಗುರ ಸಾರಿಸ್ದ. ಯಾರು ಸಮಸ್ಯೆನಾ ಪರಿಹರಿಸ್ತಾರೋ ಅವರಿಗೆ ಅರ್ಧ ರಾಜ್ಯ ಕೊಡೋದಾಗಿ. ಇದನ್ನ ಕೇಳಿದ ಕಾಳಿದಾಸನಿಗೆ ಆಶ್ರಯ ಕೊಟ್ಟಿದ್ದ ವೇಶ್ಯೆಯೊಬ್ಬಳು ಕಾಳಿದಾಸನ ಹತ್ತಿರ ಈ ಸಮಸ್ಯೆಯನ್ನ ಪೂರ್ಣಗೊಳಿಸ್ತಾಳೆ.ಅದನ್ನ ಓದಿದಾಗ ಭೋಜನಿಗೆ ಇದು ಕಾಳಿದಾಸನೇ ಬರೆದ ವಾಕ್ಯ ಎಂದು ಅರ್ಥ ಆಗುತ್ತೆ ಮತ್ತು ಅವರ ಪುನರ್ಮಿಲನ ಆಗುತ್ತೆ.
ಈ ಶ್ಲೋಕವನ್ನ ಸೂಕ್ಷ್ಮವಾಗಿ ಗಮನಿಸ್ದ್ರೆ ’ಮುಖಾಂಭೋಜೇ’ಅಲ್ಲಿ ಭೋಜರಾಜ ಕಾಣ್ತಾನೆ. ಎಷ್ಟು ಸುಂದರವಾಗಿ ಪೋಣಿಸಿದ ವಾಕ್ಯ ಅಲ್ವಾ. ಅಂತಹ ಸುಂದರ ಶಬ್ದಗಳ ಹಾರವನ್ನು ಸೃಷ್ಟಿಸಿದ ಆ ಕಲಾವಿದನ್ನ ಎಷ್ಟು ಹೊಗಳಿದ್ರೂ ಸಾಲ್ದು ಅಲ್ವಾ?ಕಾಳಿದಾಸನ ಬಗ್ಗೆ ಮಾತಾಡೋಕ್ಕೆ ಹೋದ್ರೆ ಶಬ್ದಗಳೇ ಸಾಲಲ್ಲ. ಅಭಿಜ್ನಾನ ಶಾಕುಂತಲೆಯಲ್ಲಿ ಅವ ಸೃಷ್ಟಿಸಿದ ವಾಕ್ಯಸರಪಳಿಗಳಿಗೆ ಸಮನಾದ್ದು ಯಾವುದೂ ಇಲ್ಲ ಅನ್ಸುತ್ತೆ.ಅದರಲ್ಲಿ ಶಾಕುಂತಲೆ ಋಷ್ಯಾಶ್ರಮವನ್ನು ಬಿಟ್ಟು ಹೋಗುವಾಗ ಬರೆದ ನಾಲ್ಕು ಶ್ಲೋಕಗಳು ಜಗತ್ತಿನ ಅತಿಸುಂದರ ಶ್ಲೋಕ ಅಂತಾರೆ. ಸಂಸ್ಕೃತ ಭಾಷೆ ಇಷ್ಟು ಸುಂದರವಾಗಿ ಕಾಣೋದಕ್ಕೆ ಬಹುಶಃ ಇಂಥ ಮಹನೀಯರು ಬರೆದ ನುಡಿಮುತ್ತುಗಳೇ ಕಾರಣ ಅನ್ಸುತ್ತೆ.
ಇದೆಲ್ಲಾ ಆಲೋಚನೆ ಮಾಡ್ತಾ ಇರ್ಬೇಕಾದ್ರೆ ಕರಂಟು ಬಂತು. ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...
Friday, June 22, 2007

ಅನ್ನ ಪರಬ್ರಹ್ಮ.....
ಇವೊತ್ತು ಬಹಳ ದಿನಗಳ ನಂತರ ನಮ್ಮ ಕ್ಯಾಂಟೀನ್ ಅಲ್ಲಿ ಊಟ ಮಾಡೋಕ್ಕೆ ಹೋಗಿದೆ (ವರುಣನ ಕೃಪೆಯಿಂದ). ನಮ್ಮ ಅಲ್ಲಿ ಊಟ ಸರಿ ಇರಲಿಲ್ಲ ಅವನಿಗೆ ಹಿಡಿ ಶಾಪ ಹಾಕ್ತಾ ಅರ್ಧ ಊಟ ಮಾಡ್ಬಿಟ್ಟು ಇನ್ನರ್ಧನ ಹಂಗೆ ಎಸೆದ್ಬಿಟ್ಟು ಬಂದೆ.ಬಂದು ಹಂಗೇ ಕೂತು ಮೇಲ್ ನೋಡ್ತಾ ಇದ್ದಾಗ, ಈ ಚಿತ್ರ ಕಾಣಿಸ್ತು. ಒಂದೇ ಸಾರಿ ಯೇನೋ ಒಂಥರಾ ಪಾಪ ಭಾವನೆ ಬರೊಕ್ಕೆ ಶುರು ಆಯ್ತು.ಇದು ನಿಜವಾಗ್ಲೂ ವಿಚಾರ ಮಾಡೊಂತ ವಿಷಯ ಅಲ್ವಾ?? ನಾವು ದಿನಾ ಯೆಷ್ಟು ತಿನ್ನೋ ಪದಾರ್ಥಗಳನ್ನ ಎಸೀತೀವಿ, ಯಾವತ್ತಾದ್ರೂ ಇಂಥವರ ಬಗ್ಗೆ ಆಲೋಚನೆ ಮಾಡಿದೀವಾ?? ಇವ್ರು ನಮ್ಮ ಸುತ್ತ ಮುತ್ತಾನೇ ಇರ್ತಾರೆ ಆದ್ರು ನಾವು ಗಮನಿಸೋಲ್ಲ ಲೊಕದ ಕಷ್ಟ ಎಲ್ಲಾ ನಮಗೆ ಯಾಕೆ?? ನಾವು ಎ.ಸಿ ರೂಮಲ್ಲಿ ಚೆನ್ನಾಗಿದ್ರೆ ಆಯ್ತು ಅಲ್ವಾ??
ನಮ್ಮಲ್ಲಿ "ಅನ್ನಂ ಪರಬ್ರಹ್ಮಂ" ಅಂತಾರೆ ಅದು ಇದ್ರೇನೆ ನಮ್ಮ ಜೀವನ ಅಲ್ವಾ?? ಯೆಲ್ಲಾರು ಮಾಡುವದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ನಾವು ಇದರ ಸಲುವಾಗಿ ಯೆಷ್ಟು ಕಷ್ಟ(?) ಪಡ್ತೇವಲ್ವಾ?? ಮತ್ತೆ ಸಿಕ್ಕಾಗ ಬಿಡೋದು ಯಾಕೆ??? ಇದು ಬಹಳ ಇರುವದು ಐಟಿ ಸಂಸ್ಥೆಗಳಲ್ಲಿ. ಊಟ ಚೆನ್ನಾಗಿ ಇರೋಲ್ಲ ಅದ್ಕೆ ಹಾಕ್ಕೊಂಡಿದ್ದೆಲ್ಲಾ ತೊಟ್ಟಿ ಪಾಲು. ಬಹಳ ಜವಾಬ್ದಾರಿತವಾಗಿ ಹೇಳೋದಾದ್ರೆ ನಾವು ಯೆಷ್ಟು ಬೇಕೋ ಅಷ್ಟೇ ಹಾಕ್ಕೊಂಡ್ರೆ ಒಳ್ಳೇದು. ಆದ್ರೆ ಯಾರು ಆ ಭೋಜನ ಮಂದಿರ ನಡೆಸ್ತಾ ಇದಾನೋ ಅವನ್ದು ಕೆಲವು ಜವಾಬ್ದಾರಿ ಇರುತ್ತೆ.ನಮಗೆ ಮೃಷ್ಟಾನ್ನ ಬೇಡಾ ಸ್ವಾಮಿ, ರುಚಿಯಾಗಿರೋ ಅನ್ನ ಸಾಂಬಾರು ಕೊಡಿ ಸಾಕು. ಅದಕ್ಕೆ ಅವನ ಉತ್ತರ ’ಸಾರ್ ಒಂದೇ ಸಾರಿ ೪೦೦೦ ಊಟ ಮಾಡ್ಬೇಕು ಅಂದಾಗ ರುಚಿ ಬರಲ್ಲಾ!!!’ ಮಾಡಕ್ಕಾಗಲ್ಲಾ ಅಂದ್ರೆ ಯೇನಕ್ಕೆ ತಗೋತೀಯಾ?? ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ರ ಇಲ್ಲ। ಇದಕ್ಕೆ ನಮ್ಮ ಕಂಪನಿಗಳೂ ಯೇನು ಹೇಳಲ್ಲ.ನಾವಂತೂ ಬಿಡಿ ಸಭ್ಯಸ್ತರು ಅವನ್ನ ಕೇಳಿದ್ರೆ ನಮ್ಮ ಮರ್ಯಾದೆ ಪ್ರಶ್ನೆ ಯೇನು ಅಲ್ವಾ???
ಅವೆಲ್ಲ ಆಗೊ ಕೆಲ್ಸ ಅಲ್ಲ ಬಿಡಿ, ಅದಕ್ಕೆ ಪ್ರೊಡಕ್ಷನ್ ಕಂಪನಿಗಳೇ ಬೇಕು. ಕನಿಷ್ಠ ನಾವು ಮಾಡೊಕ್ಕೆ ಆಗೋದು ದಯವಿಟ್ಟು ನಿಮ್ಮ ತಟ್ಟೆಯಲ್ಲಿ ಹಾಕಿದ್ದನ್ನ ತಿನ್ನಿ, ಅದು ಚೆನ್ನಾಗಿ ಇರ್ಲಿ ಇಲ್ದೆ ಇರ್ಲಿ ದಯವಿಟ್ಟು ಎಸೀಬೇಡಿ. ನೀವು ದಾರಿಯಲ್ಲಿ ಹೋಗ್ತಾ ಇರೋವಾಗ ಯಾವ್ದಾದ್ರು ಚಿಕ್ಕ ಮಗು ಭಿಕ್ಷೆ ಹಾಕೋ ಬದ್ಲು ಸ್ವಲ್ಪ ಕಷ್ಟ ತಗೊಂಡು ಪಕ್ಕದಲ್ಲಿರೋ ಅಂಗಡಿ ಇಂದ ಯೇನಾರ ತಿನ್ನೋಕೆ ಕೊಡ್ಸಿ. ನೀವು ನೀಡಿದ ಹಣ ಆ ಮಗುಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲಾ... ಕೊನೆಯದಾಗಿ ನಿಮ್ಮ ಮನೆಯಲ್ಲಿ ಯಾವ್ದೇ ಕರ್ಯಕ್ರಮ ಇದ್ದು ಊಟ ಹೆಚ್ಚಾಗಿದ್ರೆ ದಯವಿಟ್ಟು 1098-child helpline ಗೆ ಕರೆ ಮಾಡಿ ಅದು ಯಾವ್ದೋ ಹಸಿದ ಮಗುವಿನ ಹೊಟ್ಟೆಯನ್ನ ತುಂಬ್ಸುತ್ತೆ.ನಮ್ಮ ಕಡೆಯಿಂದ ಇಷ್ಟನ್ನಾದ್ರೂ ಮಾಡ್ಬಹುದಲ್ಲಾ??
Thursday, June 21, 2007
ಪ್ರಜಾಪಭುತ್ವ
ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..
ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..
ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..
ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,
ಆದರೆ ಪ್ರತಿ ಶಾಸಕನ ಹತ್ತಿರ
ಕನಿಷ್ಠ ೫೦ ಕೋಟಿ...
ಈ ಕ್ಷೇತ್ರದಿ ಮುದುಕರದೇ
ದರಬಾರು,
ಪ್ರತಿಯೊಬ್ಬನ ಹೆಸರಲ್ಲೂ
ಗಲ್ಲಿ ಗಲ್ಲಿಯಲೊಂದು ಬಾರು..
ರೈತ ಸಾಲ ತೀರಿಸದೇ
ಸತ್ತರೂ ಸೈ,
ಈ ರಾಜಕಾರಣಿಯದು
ಎಮ್ಮೆಯ ಮೈ...
ಐದು ವರ್ಷಕ್ಕೆ ಬದಲಾಗುವದು
ರಕ್ತಹೀರುವ ಪಾಳಿ,
ಸದೆಬಡಿಯಲಾರೆವೆ ಇವರ
ಹೊಮ್ಮಿಸಿ ಬದಲಾವಣೆಯ ಗಾಳಿ...
ಹುಹ್!!!! ಎಲ್ಲ ನೋಡಿ ಸುಮ್ಮನಿರುವದೇ
ನಮ್ಮ ತತ್ವ,
ಇದೇ ಸ್ವಾಮಿ ನಮ್ಮ್ರರ್ಥದಲ್ಲಿ
ಪ್ರಜಾಪ್ರಭುತ್ವ.
ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..
ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..
ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..
ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,
ಆದರೆ ಪ್ರತಿ ಶಾಸಕನ ಹತ್ತಿರ
ಕನಿಷ್ಠ ೫೦ ಕೋಟಿ...
ಈ ಕ್ಷೇತ್ರದಿ ಮುದುಕರದೇ
ದರಬಾರು,
ಪ್ರತಿಯೊಬ್ಬನ ಹೆಸರಲ್ಲೂ
ಗಲ್ಲಿ ಗಲ್ಲಿಯಲೊಂದು ಬಾರು..
ರೈತ ಸಾಲ ತೀರಿಸದೇ
ಸತ್ತರೂ ಸೈ,
ಈ ರಾಜಕಾರಣಿಯದು
ಎಮ್ಮೆಯ ಮೈ...
ಐದು ವರ್ಷಕ್ಕೆ ಬದಲಾಗುವದು
ರಕ್ತಹೀರುವ ಪಾಳಿ,
ಸದೆಬಡಿಯಲಾರೆವೆ ಇವರ
ಹೊಮ್ಮಿಸಿ ಬದಲಾವಣೆಯ ಗಾಳಿ...
ಹುಹ್!!!! ಎಲ್ಲ ನೋಡಿ ಸುಮ್ಮನಿರುವದೇ
ನಮ್ಮ ತತ್ವ,
ಇದೇ ಸ್ವಾಮಿ ನಮ್ಮ್ರರ್ಥದಲ್ಲಿ
ಪ್ರಜಾಪ್ರಭುತ್ವ.
Subscribe to:
Comments (Atom)